ಬೆಳಕಿನ ಮಕ್ಕಳು

ಬಂದೇವು ನಾವು ಬೆಳಗಾಗಿ
ಬೆಳಕಿನಾ ಮಕ್ಕಳು ಸಾಗಿ
ಬೆಳಕನ್ನೆ ಮ್ಯಾಲೆ ಹೊತ್ತುಕೊಂಡು,
ಬೆಳಕನ್ನೆ ಸುತ್ತು ಸುತ್ತಿಕೊಂಡು

ಎದೆಯಾಗೆ ಕುದಿಯುವಾ ಕಡಲೂ,
ಸಿಕ್ಕಿದ್ದ ಸಣ್ಣಿಸುವ ಒಡಲೂ
ಹೊಟ್ಟೆಗೆಷ್ಟೋ ಅಷ್ಟಗಲ ಬಾಯಿ,
ಗುಡ್ಡ ಕಿತ್ತೇವು ಸಿಡಿಲಿನ ಕೈಯಿ

ತಲೆಯಾಗೆ ತುಂಬಿ ಬಿರುಗಾಳಿ,
ಕಣ್ಣಾಗೆ ಈಟಿಗಳ ತಾಳಿ
ನಾಲಗೆಯು ನರ್ತಿಸುವ ಕತ್ರಿ,
ಹಲ್ಲಾಗೆ ಕಲ್ಲುಗಳ ಕಿತ್ತಿ

ಒಡಲಾಳದಿಂದ ನಮ್ಮ ಮಾತು,
ಅಲ್ಲಿಲ್ಲ ಬಣ್ಣದಾ ಬೇತು
ನೆಲದಾಳ ನಮ್ಮ ನೆಲೆ ಬೇರು,
ನಿಂತಂಗೆ ಹಿಮಕೆ ದೇವದಾರು

ನಮ್ಮ ನೋಟ ನೇರ ಸಾರೋಟು,
ಬಾವಿಗಳ ಬಗಿವ ಒಳಪಟ್ಟು
ನಿಂತ ನೀರ ಕೊಚ್ಚುವೆವು ಬೇಗ,
ನಮ್ಮ ವೇಗ ಕಿರಣದಾವೇಗ

ಬೆಳಕಿನಾ ಮಕ್ಕಳು ನಾವು,
ಬೆಳಕನ್ನೆ ಹೊತ್ತು ಬಂದೇವು
ಬೆಳಕಿನಲೆ ಬೆಳಗನರಸೇವು,
ಬೆಳಕುಂಡು ಬೆಳಕ ಪಡೆದೇವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಸ್ತವ
Next post ಮಾತು – ಮೌನದ ನಡುವೆ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys